ನಗರದ ಸುತ್ತಮುತ್ತ ಮೀನಾಕ್ಷಿ
Posted date: 18 Thu, Oct 2012 ? 07:52:33 AM
ಆದಿತ್ಯಾ ರಮೇಶ್ ಕಂಬೈನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಆದಿತ್ಯಾ ರಮೇಶ್ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಮೀನಾಕ್ಷಿ ಚಿತ್ರದ ಚಿತ್ರೀಕರಣವು ಈಗ ನಗರದ ಸುತ್ತಮುತ್ತ ಭರದಿಂದ ಸಾಗಿದೆ. 

ಚಿತ್ರಕ್ಕಾಗಿ ರಘು ಮುಖರ್ಜಿ, ಶುಭಾ ಪೂಂಜಾ, ಯತಿರಾಜ್ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ಇಸ್ಕಾನ್ ದೇವಸ್ಥಾನದ ಸುತ್ತಮುತ್ತ ಮಲ್ಲಾರ್ ಭಟ್ ಜೋಷಿ ಛಾಯಾಗ್ರಹಣದಲ್ಲಿ ನಿರ್ದೇಶಕ ಶ್ರೀಧರ್ ಹೆಗ್ಡೆ ಚಿತ್ರಿಸಿಕೊಂಡರು. 
 
ಚಿತ್ರಕ್ಕೆ ಗುರುರಾಜ್ ಎಂದೇ ಸಾಯಿ ಸಂಭಾಷಣೆ, ಮಲ್ಲಾರ್ ಭಟ್ ಛಾಯಾಗ್ರಹಣ ವಾಣಿ ಹರಿಕೃಷ್ಣ ಸಂಗೀತ, ಎ.ಪಿ. ಅರ್ಜುನ್ ಸಾಹಿತ್ಯ, ಹರ್ಷ ನೃತ್ಯ, ರವಿವರ್ಮ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ಗಗನಮೂರ್ತಿ ನಿರ್ಮಾಣ ನಿರ್ವಹಣೆ, ಈಶ್ವರಿ ಕುಮಾರ್ ಕಲೆ, ಸುನೀಲ್ ತಾಳ್ಯ ನಿರ್ದೇಶನ ಸಹಕಾರವಿದ್ದು, ಚಿತ್ರದ ಚಿತ್ರ ಕಥೆ ನಿರ್ದೇಶನ ಶ್ರೀಧರ್ ಹೆಗ್ಡೆ.   
 
ತಾರಾಗಣದಲ್ಲಿ ರಘು ಮುಖರ್ಜಿ, ಶುಭಾ ಪೂಂಜಾ, ಗೀತಾ, ತಬಲ ನಾಣಿ, ಸಂಜಯ್‌ಸೂರಿ, ಮಧುಮತಿ, ಯತಿರಾಜ್ ಮುಂತಾದವರಿದ್ದಾರೆ. 
ದಿನಾಂಕ: ೧೬-೧೦-೨೦೧೨


 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed